Monday, March 5, 2012

ಕುಂಜಾಲಿಪಾರಯಲ್ಲಿ ಮಕ್ಕಳೊಂದಿಗೆ ಒಂದು ದಿನ



ಮಳೆ ಮಧ್ಯೆ ಆಕಸ್ಮಿಕವಾಗಿ ಬಿದ್ದು ಸಿಕ್ಕಿದ ಬಿಸಿಲಿನ ದಿನ ಅಂದು. ಮನೆಯಲ್ಲಿ ಮಕ್ಕಳೆಲ್ಲರಿದ್ದರು. ಜಿಲ್ದ, ಅಮ್ಮು, ಪವನ್, ಪಕ್ಕು, ಸೂರ್ಯ ಮತ್ತು ನಂದನ್. ಎಲ್ಲರನ್ನು ಕರೆದುಕೊಂಡು ಹತ್ತಿರದ ಕುಂಜಾಲಿಪಾರ ಕಡೆಗೆ ಹೊರಟೆ. ಬಾಹಳ ದೊಡ್ಡ ಬಂಡೆ ಅದು. ಹತ್ತುವುದು ಒಂದು ಸಾಹಸವೇ. ಮಕ್ಕಳೆಲ್ಲ ಅದೆಷ್ಟು ಬೇಗ ಹತ್ತಿದರು ಗೊತ್ತಾ! ನಾವು ಇಳಿದು ಮನೆ ತಲುಪುವ ವರೆಗೆ ಮಳೆ ದೂರವೇ ಉಳಿಯಿತು.



ಕೇರಳದ ತ್ರಿಶುರಿನಲ್ಲಿರುವ ಕೊದಸೇರಿ ಬೆಟ್ಟದ ಭಾಗ ಈ ಪ್ರದೇಶ. ಇಲ್ಲಿ ಕುಂಜಾಲಿ ಮರಕ್ಕರ್ ಎಂಬ ಹೋರಾಟಗಾರ ಕುದುರೆ ಮೇಲೆ ಏರಿ ಬಂದಿದ್ದ ಎಂಬ ಗಾಥೆ ಇದೆ.